ಲಕ್ಷ್ಮೀಪ್ರಿಯಾ ಮೊಹಾಪಾತ್ರ (ಜನನ ೧೯೨೮ - ಮರಣ ೨೦ ಮಾರ್ಚ್ ೨೦೨೧) ಇವರು ಒಬ್ಬ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ. ವೇದಿಕೆಯಲ್ಲಿ ಮತ್ತು ಚಲನಚಿತ್ರಗಳಲ್ಲಿ ಒಡಿಸ್ಸಿ ನೃತ್ಯವನ್ನು ಪ್ರದರ್ಶಿಸುತ್ತಿದ್ದರು. ಆಕೆಯ ಪತಿ, ಕೇಲುಚರಣ್ ಮೊಹಾಪಾತ್ರ ಜೊತೆಗೆ ಅವರು ೧೯೪೦ ಮತ್ತು ೫೦ರ ದಶಕಗಳಲ್ಲಿ ಭಾರತದಲ್ಲಿ ಒಡಿಸ್ಸಿ ನೃತ್ಯವನ್ನು ಪುನರುಜ್ಜೀವನಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. == ವೃತ್ತಿ == ಮೊಹಾಪಾತ್ರ ಅವರು ಒಡಿಶಾದ ಖುರ್ದಾದಲ್ಲಿ ಜನಿಸಿದರು. ಅವರು ತಮ್ಮ ತಾಯಿ, ನಟಿ ಮತ್ತು ನೃತ್ಯಗಾರ್ತಿ ತುಳಸಿ ದೇವಿ ಅವರಿಂದ ನೃತ್ಯವನ್ನು ಕಲಿತರು. ಏಳನೇ ವಯಸ್ಸಿನಲ್ಲಿ, ಅವರು ಒಡಿಶಾದ ಪುರಿಯಲ್ಲಿರುವ ಅನ್ನಪೂರ್ಣ ಥಿಯೇಟರ್‌ನಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು. ೧೭ ನೇ ವಯಸ್ಸಿನಲ್ಲಿ ಅವರ ಸ್ಟಾರ್ ಪ್ರದರ್ಶಕರಾಗಿದ್ದರು. ಅವರ ಪ್ರದರ್ಶನಗಳು ದೊಡ್ಡ ಜನಸಮೂಹವನ್ನು ಸೆಳೆಯಿತು. ನಂತರ ಅವರು ಕಟಕ್‌ಗೆ ತೆರಳಿದರು. ಅಲ್ಲಿ ಅವರು ತಮ್ಮ ಪತಿ ಕೇಲುಚರಣ್ ಮೊಹಾಪಾತ್ರ ಅವರನ್ನು ಭೇಟಿಯಾದರು. ಪತಿ ಕೇಲುಚರಣ್ ಮೊಹಾಪಾತ್ರ ತರಬೇತಿ ಪಡೆದ ಒಡಿಸ್ಸಿ ನರ್ತಕರಾಗಿದ್ದರು. ಅವರು ಆ ಸಮಯದಲ್ಲಿ ನೃತ್ಯ ಪ್ರದರ್ಶನಗಳಿಗೆ ಪಕ್ಕವಾದ್ಯವಾಗಿ ತಾಳವಾದ್ಯದ ಶಾಸ್ತ್ರೀಯ ರೂಪವಾದ ತಬಲಾವನ್ನು ನುಡಿಸುತ್ತಿದ್ದರು. ೧೯೪೬ ರಲ್ಲಿ, ತನ್ನ ಪತಿಯೊಂದಿಗೆ ಒಡಿಸ್ಸಿಯಲ್ಲಿ ತರಬೇತಿ ಪಡೆದ ನಂತರ ವೇದಿಕೆಯಲ್ಲಿ ಮೊದಲ ಏಕವ್ಯಕ್ತಿ ಒಡಿಸ್ಸಿ ನೃತ್ಯವನ್ನು ಪ್ರದರ್ಶಿಸಿದರು. ಇದನ್ನು ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಗೋಟಿಪುವಾ ವೇದಿಕೆಗಳಲ್ಲಿ ನೃತ್ಯದ ಸಾಂಪ್ರದಾಯಿಕ ರೂಪವನ್ನು ಪ್ರದರ್ಶಿಸಿದ ಮೊದಲ ಮಹಿಳೆ ಇವರಾಗಿದ್ದಾರೆ. ಒಡಿಸ್ಸಿಯನ್ನು ಪ್ರದರ್ಶಿಸುವುದರ ಜೊತೆಗೆ ಹಲವಾರು ಸಾಂಪ್ರದಾಯಿಕ ಜಾನಪದ ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದರು. ೧೯೫೦ ರ ದಶಕದಲ್ಲಿ ಭಾರತದ ರಾಜಧಾನಿ ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಪರೇಡ್‌ಗಳಲ್ಲಿ ಪ್ರದರ್ಶನ ನೀಡಿದರು. ಹಲವಾರು ವೇದಿಕೆಗಳಲ್ಲಿ, ನಾಟಕಗಳಲ್ಲಿ, ಹಾಗೆಯೇ ಮಣಿಕಾ ಜೋಡಿ, ಸೂರ್ಯಮುಖಿ, ಮಾಲಾ ಜಾಹ್ನಾ ಮತ್ತು ಅಮದಾಬಟ ಸೇರಿದಂತೆ ಹಲವಾರು ಒಡಿಯಾ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಪತಿ ಕೇಲುಚರಣ್ ನೃತ್ಯಗಾರ ಮತ್ತು ನೃತ್ಯ ಸಂಯೋಜಕರಾಗಿದ್ದರು. ಆ ಸಮಯದಲ್ಲಿ ಅವರನ್ನು ಬೆಂಬಲಿಸುವ ಸಲುವಾಗಿ ಅವರು ವೃತ್ತಿಪರ ನೃತ್ಯದಿಂದ ೧೯೮೫ ರಲ್ಲಿ ನಿವೃತ್ತರಾದರು. ತಮ್ಮ ಪತಿಯೊಂದಿಗೆ ಅವರು ಒಡಿಶಾದ ಭುವನೇಶ್ವರದಲ್ಲಿರುವ ಸ್ರ್ಜನ್ ಎಂಬ ಪ್ರಸಿದ್ಧ ಶಾಸ್ತ್ರೀಯ ನೃತ್ಯ ಶಾಲೆಯನ್ನು ಸ್ಥಾಪಿಸಿದಳು. ಅವರ ಮಗ ರತಿಕಾಂತ್ ಮೊಹಾಪಾತ್ರ ಕೂಡ ಒಡಿಸ್ಸಿ ನೃತ್ಯಗಾರ ಮತ್ತು ನೃತ್ಯ ಸಂಯೋಜಕ. ಅವರು ಹಲವಾರು ಆಧುನಿಕ ಒಡಿಸ್ಸಿ ನೃತ್ಯಗಾರರಿಗೆ ನೃತ್ಯವನ್ನು ಕಲಿಸಿದರು. ಅದರಲ್ಲಿ ಪ್ರಮುಖವಾಗಿ ಮಿನಾತಿ ಮಿಶ್ರಾ, ಪ್ರಿಯಾಂಬದಾ ಮೊಹಾಂತಿ ಹೆಜ್ಮಾಡಿ ಮತ್ತು ಕುಂಕುಮ್ ಮೊಹಾಂತಿ ಇತ್ಯಾದಿ. ಅವರು ೨೦ ಮಾರ್ಚ್ ೨೦೨೧ ರಂದು ೮೬ ನೇ ವಯಸ್ಸಿನಲ್ಲಿ ನಿಧನರಾದರು. ಅವರನ್ನು ರಾಜ್ಯ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಸೆಪ್ಟೆಂಬರ್ ೨೦೨೧ ರಲ್ಲಿ ಐದು ದಿನಗಳ ಒಡಿಸ್ಸಿ ಉತ್ಸವವನ್ನು ಅವರ ನೆನಪಿಗಾಗಿ ಸಮರ್ಪಿಸಲಾಯಿತು. ಮತ್ತು ಅವರ ಹಿಂದಿನ ಅನೇಕ ವಿದ್ಯಾರ್ಥಿಗಳು ಒಡಿಸ್ಸಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. == ಉಲ್ಲೇಖಗಳು ==